

17th March 2026

ಬೆಳಗಾವಿ: ಭಾರತೀಯ ಸಾಮಾಜಿಕ ಹಾಗೂ ಧಾರ್ಮಿಕ ಪರಂಪರೆಯಲ್ಲಿ ಮಹಿಳೆಗೆ ಕೇವಲ ಬಾಯಿ ಮಾತಿನಲ್ಲಿ ಪೂಜ್ಯನೀಯ, ಗೌರವದ ಸ್ಥಾನಮಾನಗಳ ಉಲ್ಲೇಖವಿದ್ದು, ಆಧುನಿಕ ಕಾಲದಲ್ಲಿಯೂ ಮುಂದುವರಿಯುತ್ತಿರುವುದು ವಿಷಾದದ ಸಂಗತಿಯಾಗಿದೆ. ಆದ್ದರಿಂದ ಮಹಿಳೆಯರಿಗೆ ಎಲ್ಲ ಕ್ಷೇತ್ರಗಳಲ್ಲಿ ಸೂಕ್ತ ಸ್ಥಾನಮಾನಗಳು ದೊರೆಯಬೇಕಾದದ್ದು ಅಗತ್ಯವಾಗಿದೆ ಎಂದು ಯರಗಟ್ಟಿಯ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ ಪ್ರಾಧ್ಯಾಪಕ ಡಾ. ರಾಜಶೇಖರ ಬಿರಾದಾರ ಹೇಳಿದರು.
ನಗರದ ಕನ್ನಡ ಸಾಹಿತ್ಯ ಭವನದಲ್ಲಿ ಕರ್ನಾಟಕ ರಾಜ್ಯ ಸರ್ಕಾರಿ ನೌಕರರ ಕ್ಷೇಮಾಭಿವೃದ್ಧಿ ಸಂಘ ಬೆಳಗಾವಿ ಹಾಗೂ ವಿಕಲಚೇತನ ನೌಕರರ ಸಂಘ ಖಾನಾಪುರ ಇವರ ಸಹಯೋಗದಲ್ಲಿ ಆಯೋಜಿಸಿದ್ದ ಮಹಿಳಾ ದಿನಾಚರಣೆ ಹಾಗೂ ಪ್ರಶಸ್ತಿ ಪ್ರಧಾನ ಸಮಾರಂಭದ ಮುಖ್ಯ ಅತಿಥಿಯಾಗಿ ಮಾತನಾಡಿದ ಅವರು ವಿಜ್ಞಾನ ತಂತ್ರಜ್ಞಾನ ಕ್ಷೇತ್ರದಲ್ಲಿ ಸಾಕಷ್ಟು ಪ್ರಗತಿ ಸಾಧಿಸಿದ ಆಧುನಿಕ ಯುಗದಲ್ಲಿಯೂ ಮಹಿಳೆಗೆ ಪುರುಷರ ಸಮನಾದ ಸ್ಥಾನಮಾನಗಳನ್ನು ಕೊಡುವಲ್ಲಿ ವಿಫಲರಾಗಿದ್ದೇವೆ. ಸಾಮಾಜಿಕ, ಧಾರ್ಮಿಕ, ರಾಜಕೀಯ, ಕ್ರೀಡೆ, ಸಿನಿಮಾ, ವಿಜ್ಞಾನ ಹಾಗೂ ಸಾಹಿತ್ಯ ಕ್ಷೇತ್ರಗಳಲ್ಲಿ ಮಹಿಳೆಯರಿಗೆ ಅವರ ಸಾಮರ್ಥ್ಯನುಸಾರ ಅವಕಾಶಗಳು ದೊರೆತಿಲ್ಲ. ಜಾಗತೀಕರಣದ ಪ್ರಭಾವದಿಂದ ಸೃಷ್ಟಿಯಾಗಿರುವ ಸ್ಪರ್ಧಾತ್ಮಕತೆಯಲ್ಲಿ ನಾವು ಮುಂದುವರೆಯಲು ಸ್ತ್ರೀ ಪುರುಷರು ಒಂದಾಗಿ ಪ್ರಯತ್ನಿಸಿದರೆ ಮಾತ್ರ ಕುಟುಂಬಗಳು ಆ ಮೂಲಕ ದೇಶದ ಪ್ರಗತಿ ಸಾಧ್ಯವಾಗುತ್ತದೆ. ಆದ್ದರಿಂದ ಮಹಿಳೆಗೆ ಎಲ್ಲ ಕ್ಷೇತ್ರಗಳಲ್ಲಿ ಸಮಾನ ಪ್ರತಿನಿತ್ಯದ ಅಗತ್ಯವಿದೆ ಎಂದು ಪ್ರತಿಪಾದಿಸಿದರು.
ಖ್ಯಾತ ಸ್ತ್ರೀ ರೋಗ ತಜ್ಞರಾದ ಡಾ. ವನಿತಾ ಮೆಟಗುಡ್ಡ ಅವರು ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿ ಆರೋಗ್ಯವೇ ಮಹಾಭಾಗ್ಯವಾಗಿದ್ದು ಮಹಿಳೆಯರು ತಮ್ಮ ಆರೋಗ್ಯದ ಕಾಳಜಿ ವಹಿಸಬೇಕು ಎಂದು ಹೇಳಿದರು. ಶ್ರೀಮತಿ ಎಸ್.ಎನ್. ಭದ್ರಿ, ಡಾ. ದಾನಮ್ಮ ಝಳಕಿ, ಕ.ಸಾ.ಪ. ಗೌರವ ಕಾರ್ಯದರ್ಶಿ ಎಂ.ವೈ. ಮೆಣಸಿನಕಾಯಿ ಅವರು ಮಾತನಾಡಿದರು. ಸುರೇಶ ಸಕ್ರೆನ್ನವರ ಅಧ್ಯಕ್ಷತೆ ವಹಿಸಿದ್ದರು. ಡಾ. ಸುನೀಲ ಪರೀಟ, ನಸ್ರಿನ್ ಬಾನು ಕಾಸಿಮನವರ, ವಿಠ್ಠಲ ಯಕಾಜನವರ ಉಪಸ್ಥಿತರಿದ್ದರು.

ಗಂಗಾವತಿ ಫ್ಯಾನ್ಸಿ ಸ್ಟೋರ್ ನಲ್ಲಿ ನಶೆ ಬರುವ ಟ್ಯಾಬ್ಲೆಟ್ ಮಾರಾಟ: ಪ್ರಕರಣ ದಾಖಲು- ಯುವಕರಿಗೂ ಲಿಂಕ್: ವ್ಯಕ್ತಿಯೋರ್ವನ ಹೇಳಿಕೆ

ಗಂಗಾವತಿಯಲ್ಲಿ ರಾಷ್ಟ್ರೀಯ ಲೋಕ ಅದಾಲತ್- ನಾಲ್ಕು ನ್ಯಾಯಾಲಯಗಳಲ್ಲಿ 617 ಪ್ರಕರಣ ಇತ್ಯರ್ಥ: ರೂ. 8.48 ಕೋಟಿ ಸರಕಾರಕ್ಕೆ ಜಮೆ- ಮನಸ್ಥಾಪ ಬಿಟ್ಟು ಒಂದಾದ ಮೂವ್ವರು ದಂಪತಿಗಳು

ಜಿಲ್ಲೆಯಾದ್ಯಂತ ನ್ಯಾಯಾಲಯಗಳಲ್ಲಿ ಲೋಕ ಅದಾಲತ್- ರೂ.44.44 ಕೋಟಿ ಮೌಲ್ಯದ 49953 ಪ್ರಕರಣಗಳು ಇತ್ಯರ್ಥ- ಮನಸ್ಥಾಪ ಬಿಟ್ಟು ಒಂದಾದ ಏಳು ದಂಪತಿಗಳು
ಬಸವರಾಜ ಕಟ್ಟೀಮನಿ ಪ್ರತಿಷ್ಠಾನದ ಕಥಾ ಸ್ಪರ್ಧೆಯಲ್ಲಿ ಜಿಲ್ಲೆಗೆ ಪ್ರಥಮ ಸ್ಥಾನ ಪಡೆದ ತಿರುಳ್ಗನ್ನಡ ನಾಡಿನ ಕೀರ್ತಿ ಕೋಟಗಿಗೆ ಅಭಿನಂದನೆಗಳ ಮಹಾಪೂರ